ವಾಸ್ತವಿಕ್ ಆಲೋಚನೆಗಳು - ಭಾಗ ೧


ಕಾಯಕವೇ ಕೈಲಾಸ
ಯಂದು ನಂಬಿದವರ ಬೇಕೆದೆ ವಿಳಾಸ
ಪರರ ಹಿತಕೆ ಬದಾಕುವ ಜನ
ಯಲ್ಲಿ ಸಿಗುವರು ಯಂದು ಕೇಳೆದೆ ಹಣ್ಣ

ಭೂಮಿಯಲ್ಲಿ ಮಾಡಲು ಹರುಟಿವೆವು ನಾವು ಸ್ವರ್ಗ
ಆದರೆ ತಪ್ಪು ಹೋಗಿದೆ ನಾವು ಚಲಿಸುವ ಮಾರ್ಗ
ಮುಂದಾಲೋಚನೆಯ ವೈಫಾಲ್ಯ್ತೇವೆ ಭೂಮಿಯನು ಮಾಡಿದೆ ನರಕ್
ಬಾವನೆಗಳಿಗೆ ಸ್ಥಾನವಿಲ್ಲ ಇಲ್ಲಿ ಬರೆ ಕೃತ್ರಿಮ ಬುದ್ಧಿವಂತಿಕೆಯ ತರ್ಕ್

ಹಾಸೆಗೆ ಇದಸ್ಟು ಕಾಲು ಚಾಚು
ಬಾಚಣಿಗೆ ಇದ್ದರೆ ಕೂದಲು ಬಾಚು
ತಲೆ ಇಲ್ಲದ್ ಜನರೆಗೆ ಬಾಚಣಿಗೆ ಏಕೆ?
ನಿದ್ರೆ ಬರದ್ ಲೊಕಕೆ ಹಾಸಿಗೆ ಯಾಕೆ?

ಕೈ ಕೆಸರಾದರೆ ಬಾಯಿ ಮಸರು
ಮರಗಳು ಮಾಯವಾಗುವಾಗ ಇನ್ನು ಯಲ್ಲಿ ಹಸಿರು?
ಹಕ್ಕಿಗಳೇ ಇರದ ಮೇಲೆ ಕಾಣಿಸುವುದು ಹೇಗೆ ಗೂಡು?
ಪುಸ್ತಕ್ ಚಿತ್ರಗಳಲ್ಲಿ ಮಾತ್ರ ನಾವು ನೋಡಬವುದು ಈಗ ಕಾಡು

ಪರಿವರ್ತನೆ ಪ್ರಕೃತಿಯ ನಿಯಮ
ಸಾಕ್ಷಿ ಇದಕೆ ನಿರಂತಾರ ಚಲಿಸುವ ಸಮಯ
ಬದ್ಲಾವಣೆಯ ಸಾಗರದಲ್ಲಿ ತೇಲಿ ಹೋಗಿದೆ ಮಾನವಕುಲ
ಪ್ರೀತಿ, ವಿಶ್ವಾಸ, ಸತ್ಯ ಕಲ್ಲಿದುಕೊಂಡಿವೆ ಬಲ್ಲ

ಸೂರ್ಯನನ್ನು ಪರಿಕ್ರಮಿಸುವ ನಮ್ಮ ಭೂಮಿ
ಬ್ರಹ್ಮಾಂಡದಲ್ಲಿ ವಂದು ನಿಕೃಸ್ಟ ಬಿಂದು
ಇಂತಹ ಆತ್ಯಲ್ಪ ಜಗದಲ್ಲಿ ನಮ್ಮ ಜೀವನ
ಮಹತ್ವಾಕಾಂಕ್ಷೆ ತುಂಬಿದ ನಮ್ಮ ಸ್ವಾರ್ಥಿ ಜೀವನ

ಹೌದು ಬದಲಾಗಿದೆ ನಾವು ಬದಾಕುವ ರೀತಿ
ಬದಲಾಗಿದೆ ನಮ್ಮ ತತ್ವಗಳು ಹಾಗೂ ನೀತಿ
ಆದರೆ ಮಾನವೀಯತೆ ಸಂರಕ್ಷಣೆ ನಮ್ಮ ಹೊಣೆ
ಇದನ್ನು ಮರೆತರೆ ಸನಿಹವಿದೆ ನಮ್ಮ ಕೊನೆ

~Surya
ಸ್ವಯಂ ಪ್ರೇರಿತ

Comments

Popular posts from this blog

One CraZy Night

Game of Thrones - The Indian Name Version

A mist covered destiny